ಕಾರ್ಕಳದ ಜೋಡುರಸ್ತೆಯಲ್ಲಿ ಕ್ರಿಯೇಟಿವ್ ಶಿಕ್ಷಣ ಸಂಸ್ಥೆಯ ವತಿಯಿಂದ ವಿನೂತನ ಪರಿಕಲ್ಪನೆಯಡಿಯಲ್ಲಿ ತೆರೆಯಲಾಗಿರುವ “ಪುಸ್ತಕ ಮನೆ”ಯ ಉದ್ಘಾಟನಾ ಸಮಾರಂಭ






ಭವ್ಯ ಭಾರತದ ಸ್ವಾತಂತ್ರ್ಯದ ಅಮೃತ ಮಹೋತ್ಸವದ ಅಂಗವಾಗಿ ಕಳೆದ ವರ್ಷದ ಸ್ವಾತಂತ್ರ್ಯ ಮಹೋತ್ಸವದ ದಿನದಿಂದ ಇವತ್ತಿನ ತನಕ ಪ್ರತೀ ದಿನ ಬೆಳಗ್ಗೆ 11.00 ಗಂಟೆಗೆ ಸರಿಯಾಗಿ ಜನ ಗಣ ಮನ… ರಾಷ್ಟ್ರಗೀತೆಯನ್ನು ಹೇಳುವಂತ ಒಂದು ತಪಸ್ಸನ್ನು ವೃತಾಚರಣೆಯನ್ನಾಗಿ ಮಾಡಿರುವಂತಹದ್ದು ಅತ್ಯಂತ ವಿಶಿಷ್ಟವಾದ ಕಾರ್ಯವಾಗಿದೆ.



ರಾಜ್ಯದ ಮೊದಲ ಪರಿಸರ ಸ್ನೇಹಿ ಮಲ ತ್ಯಾಜ್ಯ ಸಂಸ್ಕರಣ ಘಟಕ (ಫಿಕಲ್ ಸ್ಲಡ್ಜ್ ಮ್ಯಾನೇಜ್ಮೆಂಟ್) ಅತ್ಯಂತ ಯಶಸ್ವಿಯಾಗಿ ಸುಂದರ ಉದ್ಯಾನವನವಾಗಿ ರೂಪುಗೊಂಡಿದೆ. ಕಾರ್ಕಳ ನಗರ ನೈರ್ಮಲ್ಯದ ಉದ್ದೇಶದಿಂದ ರಾಜ್ಯದಲ್ಲಿ ಮೊದಲ ಬಾರಿಗೆ ಪುರಸಭೆ ವ್ಯಾಪ್ತಿಯಲ್ಲಿ ಈ ಘಟಕವನ್ನು ಕಾರ್ಕಳದಲ್ಲಿ ಅನುಷ್ಠಾನಗೊಳಿಸಿದ್ದು ಮಾತ್ರವಲ್ಲದೆ ಅತ್ಯಂತ ಪರಿಣಾಮಕಾರಿಯಾಗಿ ನಿರ್ವಹಣೆ ಮಾಡಲಾಗುತ್ತಿದೆ.




















